ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ

ಜಿಲ್ಲೆಯ ಕನ್ನಡಿಗರು ಸೇರಿ ಈ ವೇದಿಕೆಯನ್ನು ಉಪಯೋಗಿಸಬಹುದು. ಜಿಲ್ಲೆಯ ವಿಷಯಗಳನ್ನು ಸೇರಿಸಬಹುದು

Latest Activity

22 hours ago
yesterday
Manju Badiger is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 13
Raju Adapur is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
November 7
KOPPAL added 2 photos
October 31
Abukalam Kazi is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
October 25
Rohit Patil was featured
October 24
raghu koppal, Raghavendra Kulkarni and Rohit Patil joined ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
October 22
October 20
Mohammad Hussain is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
October 14
October 6
prakash v mangalore is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
October 5
Mohd Rafi and KOPPAL are now friends
September 29
RAVINDRANATH J HULLUR is now a member of ಕೊಪ್ಪಲ್ ಜಿಲ್ಲೆ ಕನ್ನಡಿಗರ ಸಂಪರ್ಕ ಜಾಲ
September 28
September 27
September 27

RSS

Loading feed

Members

  • Raju Adapur
  • Shyamsundar Shetty P
  • ramesh biradar
  • Thukaram Rao
  • vishu
  • Anand Deshpande
  • prakash v mangalore
  • RAVINDRANATH J HULLUR
  • Raghavendra Kulkarni
  • Prahlad Bandi
  • Abukalam Kazi
  • raghu koppal
  • Raghu
  • Rohit Patil
  • durgaprasad
  • Naveenkumar Kolli

RSS

Loading feed

 

Photos

Loading…

Blog Posts

KOPPAL

Places of Interest

Places of Interest

ANEGUNDI is in Gangavathi Taluk and is one of the most ancient places in the district, meaning in Kannada "elephant pit" said to have been the place where the elephants of the Vijayanagara kings were kept, is situated on the left bank of the river Tungabhadra, just opposite the ruined capital of the Vijayanagara empire. Anegundi has been identified with a part of Kishkindha, the kingdom of Vali and Sugreva of the Ramayana. The picture at the left side shows one of the ancient… Continue

Posted by KOPPAL on July 10, 2009 at 7:58pm

KOPPAL

Brief History of Koppal

Brief History of Koppal

The history of Koppal can be traced back to the kingdoms of Shathavahanas, Gangas, Hoysalas and Chalukya Dynasties. The name of the district i.e. "KOPPAL" is found in the poetic work of the great poet Kavirajamarga (During King Nrupathunga's time of 814-878 A.D.) as "VIDITHA MAHA KOPANA NAGARA". During Ashoka's period, the Jainism gained greater momentum in this region. Therefore, it was called "Jainkashi". In twelth century A.D. Veerashaivaism of Social Reformer Basaves… Continue

Posted by KOPPAL on July 10, 2009 at 7:57pm

RSS

Loading feed

RSS

Loading feed

 
 

About

KOPPAL KOPPAL created this social network on Ning.

Create your own social network!

Events

Groups

Forum

KOPPAL

ekavi 2003 2004 -2005 -2006 -2007

Started by KOPPAL Jul 11.

KOPPAL

EKAVI SCHOOL ADOPTION PROGRAMS -

Started by KOPPAL Jul 11.

KOPPAL

ekavi activities 2008

Started by KOPPAL Jul 11.

KOPPAL

ekavi activities 2009

Started by KOPPAL Jul 11.

RSS

ಬೆಂಗಳೂರಿನಲ್ಲಿ 183 ಕೆರೆ- ಇದು ಅಧಿಕೃತ...

123 ಕೆರೆಗಳಿಗೆ ಶುಕ್ರದೆಸೆ; ಭೂದಾಹಿಗಳಿಗೆ ಬೇಲಿ
ಉದ್ಯಾನನಗರಿಯಲ್ಲಿ ಗತವೈಭವದ ಇತಿಹಾಸ ಮೆಲುಕುಹಾಕುತ್ತಾ, ಬಡಕಲಾಗುತ್ತಿದ್ದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆವರಿಸಿಕೊಳ್ಳುತ್ತಿದೆ. ನಗರದಲ್ಲಿ ನೂರಾರು ಕೆರೆಗಳಿವೆಯೇ ಎಂಬ ಪ್ರಶ್ನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಉತ್ತರ ನೀಡಿದೆ. 183 ಕೆರೆಗಳು ಬಿಬಿಎಂಪಿ ಗಣನೆಗೆ ಬಂದಿದ್ದು, 123 ಕೆರೆಗಳಿಗೆ ಸದ್ಯವೇ ಬೇಲಿ ಬೀಳಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಗೆ ಚಾಲನೆ ದೊರಕಿರುವ 36 ಕೆರೆಗಳಲ್ಲದೆ, 123 ಕೆರೆಗಳ ಸರ್ವೆ ಕಾರ್ಯ ಆರಂಭವಾಗಿದೆ. ಅವುಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಿ, ಜನವರಿ ಅಂತ್ಯದೊಳಗೆ ಬೇಲಿ ಹಾಕಲಾಗುತ್ತದೆ. ಇದಕ್ಕಾಗಿ 40 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದಾರು ಕೆರೆಗಳಲ್ಲಿ ಬೇಲಿ ಕಾಮಗಾರಿಯೂ ಆರಂಭವಾಗಿದೆ.
ವಿಜಯ ಕರ್ನಾಟಕ ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು 'ನಮ್ಮೂರ್ ಕೆರೆ' ಲೇಖನ ಮಾಲಿಕೆ ಮೂಲಕ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆನಂತರ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ, ಬಿಡಿಎ ವಿಶೇಷ ಯೋಜನೆಗಳನ್ನು ರೂಪಿಸಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ 21 ಕೆರೆಗಳಿಗೆ ಕಾಯಕಲ್ಪ ನೀಡುವ ಕಾಮಗಾರಿಗೆ ಚಾಲನೆ ನೀಡಿದೆ. ಇದರಲ್ಲಿ ಪ್ರಮುಖವಾಗಿ ಒತ್ತುವರಿ ತೆರವುಗೊಳಿಸಿರುವುದು ಗಮನಾರ್ಹ. ಯಾವುದೇ ಒತ್ತುವರಿಯನ್ನು ಮನ್ನಾ ಮಾಡಬೇಡಿ ಎಂಬ ಬಿಬಿಎಂಪಿ ಆಯುಕ್ತರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಆದರೆ, ಕೆಲವೆಡೆ ಶಾಸಕರ ಒತ್ತಾಸೆಗೆ ಕೆಲವು ಒತ್ತುವರಿ ತೆರವಾಗಿಲ್ಲ. ಅಭಿವೃದ್ಧಿಯ ಪಥದಲ್ಲಿರುವ ಕೆರೆಯಲ್ಲಿ ಹೂಳು ತೆಗೆದು, ಬೇಲಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಮುನ್ನ ಅಲ್ಲಿನ ಒತ್ತುವರಿಗೆ ಪ್ರಥಮವಾಗಿ ಅಂತ್ಯ ಹಾಡಲಾಗುತ್ತದೆ. ಇದರಿಂದ ಬಡಾವಣೆಗಳಿಗಾಗಿ ಕೆರೆಗಳನ್ನು ನುಂಗಿಕೊಂಡಿದ್ದ ಭೂದಾಹಿಗಳಿಗೆ ಹಿನ್ನಡೆ ಆಗಲಿದೆ. ಅಷ್ಟೇಅಲ್ಲ, ಹೊಸ ಒತ್ತುವರಿಗೂ ಕಡಿವಾಣ ಬೀಳಲಿದೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕೆರೆಗಳ ಸಮೀಕ್ಷೆ ಕಾರ್ಯ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ, ಲಾಲ್‌ಬಾಗ್, ಅಗರ, ಹೆಬ್ಬಾಳ, ಹಲಸೂರು, ಕೆಂಪಾಂಬುಧಿ, ಯಡಿಯೂರು, ಸ್ಯಾಂಕಿ, ಹೆಣ್ಣೂರು, ಕೆಂಗೇರಿ, ವಸಂತಪುರ, ಹಲಗೆವಡೇರಹಳ್ಳಿ ಕೆರೆ ಸೇರಿದಂತೆ 25 ಕೆರೆಗಳನ್ನು ಬಿಡಿಎ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿವೆ. ಬಿಬಿಎಂಪಿ 21 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದೆ. ಬಿಡಿಎ ತನ್ನ ವ್ಯಾಪ್ತಿಯ 12 ಕೆರೆಗಳಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಅಮೃತಹಳ್ಳಿ ಹಾಗೂ ಜಕ್ಕೂರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಉಳಿದ 123 ಕೆರೆಗಳಿಗೆ ಬಿಬಿಎಂಪಿ, ಒತ್ತುವರಿ ತೆರವುಗೊಳಿಸಿ ಬೇಲಿ ಹಾಕುವ ಕಾರ್ಯವನ್ನು ಆರಂಭಿಸಿದೆ.
ನಗರದ 11 ವಿಧಾನಸಭೆ ವ್ಯಾಪ್ತಿಯಲ್ಲಿರುವ ಈ 123 ಕೆರೆಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಇದರಲ್ಲಿ 50 ಕೆರೆಗಳ ಸರ್ವೆ ಮುಗಿದಿದ್ದು, ಉಳಿದ್ದದ್ದು ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ಎಲ್ಲ ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಜನವರಿ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಲಿದೆ.
ಬೆಳ್ಳಂದೂರು, ಅಟ್ಟೂರು, ಕಲ್ಕೆರೆ, ಚಿನ್ನಪ್ಪನಹಳ್ಳಿ, ವರ್ತೂರು ಕೆರೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇಲ್ಲಿ ಬೇಲಿ ಹಾಕುವ ಕಾರ್ಯ ಆರಂಭವಾಗಿದ್ದು, ಅಂಗಳದಲ್ಲಿ ಸಸಿ ನೆಡಲಾಗುತ್ತಿದೆ. ಮಳೆ ನೀರು ಕೆರೆಗಳಿಗೆ ಹರಿಯಲು ರಾಜಾಕಾಲುವೆಗಳ ತೆರವುಗೊಳಿಸಲಾಗುತ್ತಿದೆ.
ಕೆರೆಗಳಲ್ಲಿ ಔಷಧ ಸಸ್ಯ
ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿರುವ ಕೆರೆಗಳ ಅಂಗಳದಲ್ಲಿ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನಡೆಲಾಗುತ್ತಿದೆ. ಇದಕ್ಕಾಗಿ 16 ಸಸ್ಯಗಳನ್ನು ಗುರುತಿಸಲಾಗಿದೆ. ಅಮೃತಬಳ್ಳಿ, ಮಾವು, ಬಜೆ, ಆಡುಸೊಗೆ, ಲಾವಂಚಾ, ಭೃಂಗರಾಜ, ದಾಸವಾಳ, ಚಕ್ರಮುಖಿ, ಬಿಳೀ ಲಕ್ಕಿ ಸಸ್ಯಗಳು ಇದರಲ್ಲಿ ಸೇರಿವೆ.
ಬೆಂಗಳೂರಿನಲ್ಲಿ ಎಂಬತ್ತೇ ಕೆರೆಗಳಿರುವುದು ಎಂದು ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳು, ಇದೀಗ ಎಚ್ಚೆತ್ತುಕೊಂಡಿದ್ದಾರೆ. ಅದಕ್ಕೇ 183 ಕೆರೆಗಳು ಕಾಣಿಸಿಕೊಂಡಿವೆಯಲ್ಲದೆ, ಲೆಕ್ಕಕ್ಕೂ ಸಿಕ್ಕಿವೆ. ಕಂದಾಯ ಇಲಾಖೆಯ ಕಡತಗಳನ್ನು ಪರಿಶೀಲಿಸಿ ಮತ್ತಷ್ಟು ಶೋಧಕಾರ್ಯ ಆದದ್ದೇ ಆದರೆ, ಇನ್ನೂ ನೂರಾರು ಕೆರೆಗಳು ಸಿಗುತ್ತವೆ. ಅವುಗಳೆಲ್ಲಕ್ಕೂ ಬೇಲಿ ಬಿದ್ದರೆ ಭೂದಾಹಿಗಳು
ವಿಧಾನಸಭೆ ಕ್ಷೇತ್ರವಾರು ಬೇಲಿ ಕಾಣಲಿರುವ ಕೆರೆಗಳು
ಮಹದೇವಪುರ-26, ಬೆಂಗಳೂರು ದಕ್ಷಿಣ-24, ಯಶವಂತಪುರ-19, ಕೆ.ಆರ್. ಪುರ-15, ಬ್ಯಾಟರಾಯನಪುರ-10, ಬೊಮ್ಮನಹಳ್ಳಿ-7, ರಾಜರಾಜೇಶ್ವರಿನಗರ-7, ಯಲಹಂಕ-5, ಸರ್ವಜ್ಞನಗರ-4, ದಾಸರಹಳ್ಳಿ-4, ಸಿವಿ ರಾಮನ್‌ನಗರ-2

ಕೆಂಪಾಂಬುಧಿ ಕೆರೆ ಏರಿ ಮೇಲೆ...

ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಏರಿ ಮೇಲೆ ಮೊನ್ನೆ ಶುಕ್ರವಾರ ಅಂದರೆ, ಅಕ್ಟೋಬರ್ 23ರಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆಯಾಗಿತ್ತು. "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಎಂಬ ಶೀರ್ಷಿಕೆಯಡಿ ಕೆರೆಯ ಸಂರಕ್ಷಣೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ಜತೆಗೆ ಸ್ಥಳೀಯ ಶಾಸಕರಿಂದ ಕೆರೆ ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂದು ಕೇಳುವ ಪ್ರಶ್ನೆಯ ವೇದಿಕೆಯನ್ನೂ ಸೃಷ್ಟಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸ್ನೇಹ ಚೈತನ್ಯ ಸಾಮಾಜಿಕ ಟ್ರಸ್ಟ್ ಹಾಗೂ ಪ್ರಗತಿ ಪರ ಮಹಿಳಾ ಸಮಾಜ ಆಯೋಜಿಸಿದ್ದರಿಂದ ಮಹಿಳೆಯರೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆರೆ ಸಂರಕ್ಷಣೆಗೆ ಮಹಿಳೆಯರೇ ಬೇಕು. ಅವರಲ್ಲಿರುವ ಕಾಳಜಿ ಹಾಗೂ ಮನೆಯಲ್ಲಿ ನೀರು ಬರಲಿಲ್ಲವೆಂದರೆ ಅವರೇ ಪಾಡು ಪಡಬೇಕಾದ್ದು ಅಲ್ಲವೆ?
ಕೆಂಪೇಗೌಡ ಮನೆತನದವರು ಕಟ್ಟಿಸಿದ ಕೆರೆ ಕೆಂಪಾಂಬುಧಿ ಕೆರೆ. ಪಾಳೇಗಾರರ ವಂಶಸ್ಥರಾದ ಕೆಂಪಮ್ಮನವರ ಹೆಸರು ಈ ಕೆರೆಗಿತ್ತು. ಕೆಂಪಮ್ಮ ಕೆರೆ ಕಾಲ ಕಳೆದಂತೆ ಕೆಂಪಾಂಬುಧಿ ಆಯಿತು. ಕುಡಿಯುವ ನೀರು ಪೂರೈಸುತ್ತಿದ ಕೆರೆ ಇಂದು, ವಿಷಾನಿಲ ಸೂಸುತ್ತಿದೆ. ಕೆರೆಯ ಅಂಗಳದಲ್ಲಿ ಓಡಾಡುವುದೂ ಕಷ್ಟಕರವಾಗಿದೆ. 1983ರಿಂದಲೂ ಈ ಕೆರೆಯ ಅಭಿವೃದ್ಧಿ ಆಗುತ್ತಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಅಂದರೆ, ಎಷ್ಟು ಕೋಟಿ ರೂ. ಕೆರೆಗೆ ಚೆಲ್ಲಿದ್ದಾರೆ ಯೋಚಿಸಿ! ಆದರೂ ಈ ಕೆರೆ ಅಭಿವೃದ್ಧಿ ಆಗಿಲ್ಲ. ಈಗ ಮತ್ತೆ ೮ ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಂದರೆ ನಮ್ಮ ಹಣ ಹೇಗೆ ವ್ಯಯ ಆಗುತ್ತಿದೆ ನೋಡಿ. ಇದನ್ನು ನಾವು ಎದ್ದು ನಿಂತು ಕೇಳಲಿಲ್ಲವೆಂದರೆ ಅದೆಲ್ಲದರ ಹೊರೆ ನಮ್ಮ ಮೇಲೇ ಬೀಳುತ್ತದೆ.
ಕುಡಿಯುವ ನೀರು ಕೊಡಿ ಎಂದು ಜನಪ್ರತಿನಿಧಿಗಳ ಮೇಲೆ ಒತ್ತಾಯ ಮಾಡುತ್ತೇವೆ. ಆದರೆ, ಸ್ಥಳೀಯ ವಾತಾವರಣ ಹೇಗಿದೆ? ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಾವೇರಿ ನೀರು ಸಾಲುತ್ತಿಲ್ಲ ಎಂದರೆ, ಬೋರ್‌ವೆಲ್ ಹಾಕಿಬಿಡಿ. ಟ್ಯಾಂಕ್ ಕಟ್ಟಿಸಿ, ಅಲ್ಲಿಂದ ನೀರು ತೆಗೆದುಕೊಳ್ಳುತ್ತೇವೆ ಎಂಬುದು ಸಲಹಾತ್ಮಕ ಒತ್ತಾಯವಾಗಿರುತ್ತದೆ. ಆದರೆ, ಸುತ್ತಮುತ್ತಲಿನ ಪರಿಸರ ಉತ್ತಮವಾಗಿಲ್ಲದಿದ್ದರೆ ಬೋರ್‌ವೆಲ್‌ನಲ್ಲಿ ಒಳ್ಳೆ ನೀರು ಎಲ್ಲಿಂದ ಬರುತ್ತೆ? ಅಂತರ್ಜಲ ಮೂಲವಾಗಿರುವ ಕೆರೆಗಳಲ್ಲಿ ತ್ಯಾಜ್ಯ, ರಾಸಾಯನಿಕ ಅಂಶ, ಕೊಳಕೇ ಇದ್ದರೆ, ಅದೇ ಬೋರ್‌ವೆಲ್‌ನಲ್ಲೂ ಬರುತ್ತದೆ. ಇದು ಎಲ್ಲರ ಗಮನದಲ್ಲಿರಲಿ.
ಅಂದಹಾಗೆ, ಈ ಕಾರ್ಯಕ್ರಮ ಮಧ್ಯಾಹ್ನ 3.3-0ಕ್ಕೆ ಆಯೋಜನೆಯಾಗಿತ್ತು. ಸಮಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಬರಲಿಲ್ಲ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ತನಿಖೆಗೆ ಕೇಂದ್ರದ ತಂಡ ಆಗಮಿಸಿದ್ದರಿಂದ ಅದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಸಚಿವರು ಬರಲಿಲ್ಲವಂತೆ. ಅದರಿಂದ ಕಾರ್ಯಕ್ರಮ ಆರಂಭ ತಡವಾಯಿತು. ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಕೂಡ ತಡವಾಗಿಯೇ ಬಂದರು. ಆದರೆ, ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಸರಿಯಾದ ಸಮಯಕ್ಕೆ ಹಾಜರಿದ್ದರು.
ಕೆರೆ ಸಂರಕ್ಷಣೆಗೆ ಅಲ್ಲಲ್ಲಿ ಆಯಾ ಸ್ಥಳೀಯ ಸಂಘ-ಸಂಸ್ಥೆಗಳು ಟೊಂಕಕಟ್ಟಿ ನಿಂತರೆ, ಏನು ಅಭಿವೃದ್ಧಿ ಆಗುತ್ತಿದೆ ಎಂದು ಪ್ರಶ್ನಿಸಿದರೆ ಬೇಕಾಬಿಟ್ಟಿಗೆ ತಡೆಬೀಳುತ್ತದೆ. ಇಂತಹ ಪ್ರಯತ್ನ ಅಲ್ಲಲ್ಲಿ ಆಗಲಿ.
ವಾಹನಗಳಿಗೇ ಹೆಚ್ಚು ಕಾವೇರಿ ನೀರು ಬಳಕೆ
ನೂರಾರು ಕಿಲೋಮೀಟರ್ ದೂರದಿಂದ ಬೆಂಗಳೂರಿಗೆ ತರುತ್ತಿರುವ ಕಾವೇರಿ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ಇತರೆ ಬಳಕೆಗೆ ಅರ್ಧಕ್ಕಿಂತ ಹೆಚ್ಚು ಬಳಕೆ ಆಗುತ್ತಿದೆಯೇ?
ಹೌದು, ಎನ್ನುತ್ತಾರೆ ಬಸವನಗುಡಿ ಶಾಸಕ ರವಿಸುಬ್ರಮಣ್ಯ. ಬೆಂಗಳೂರು ನಗರದಲ್ಲಿ ಶೇ.೫೦ಕ್ಕೂ ಹೆಚ್ಚು ಕಾವೇರಿ ನೀರು ವಾಹನಗಳನ್ನು ತೊಳೆಯುವುದಕ್ಕೆ ವ್ಯಯವಾಗುತ್ತಿದೆ. ಈ ಬಳಕೆಯನ್ನು ಕಡಿಮೆ ಮಾಡದಿದ್ದರೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂಬ ಆತಂಕವೂ ಶಾಸಕರದ್ದಾಗಿದೆ.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಹಾಗೂ ಪ್ರಗತಿಪರ ಮಹಿಳಾ ಸಮಾಜದ ಸಹಯೋಗದಲ್ಲಿ ಬಸವನಗುಡಿಯ ಕೆಂಪಾಂಬುಧಿ ಕೆರೆ ಏರಿಯಲ್ಲಿ "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.
ಕೆಂಪಾಂಬುಧಿ ಕೆರೆಯನ್ನು 1983ರಿಂದಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೂ ಕೆರೆ ಶುಚಿಯಾಗಿಲ್ಲ. ಇದೀಗ ಕೆರೆಯ ಸಮಗ್ರ ಅಭಿವೃದ್ಧಿಗೆ ೮ ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಆರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಆಗುವುದಲ್ಲದೆ, ನಾಡಪ್ರಭು ಕೆಂಪೇಗೌಡರ ಕಾಲದ ಚಿತ್ರಣ ನೀಡುವ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಗರಕ್ಕೆ ಮಾದರಿ ಕೆರೆಯಾಗಿ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಚನ್ನಮ್ಮರಾಗಿ ಕೆರೆ ಉಳಿಸಿ
ಕಿತ್ತೂರು ರಾಣಿ ಚನ್ನಮ್ಮ ರೀತಿಯಲ್ಲಿ ಧೈರ್ಯವಂತರಾಗಿ ನನ್ನ ಜತೆ ಹೋರಾಡಿ. ನೂರು ಚನ್ನಮ್ಮಂದಿರು ನನ್ನೊಂದಿಗೆ ಹೋರಾಡಿದರೆ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳನ್ನೂ ಉಳಿಸುತ್ತೇನೆ ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಶ್ವಾಸನೆ ನೀಡಿದರು.
ನಿಮ್ಮ ಸಮೀಪವಿರುವ ಕೆರೆಗೆ ಯಾರಾದರೂ ಮಣ್ಣು ತುಂಬಿದರೆ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರೆ ಅವರಿಗೆ ಪೊರಕೆ ಸೇವೆ ಮಾಡಿ. ಕೆರೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ. ಯೋಜನೆ ಬಗ್ಗೆ ನಿಗಾವಹಿಸಿ, ಲೆಕ್ಕ ಪರಿಶೋಧಿಸಿ. ಇದರಿಂದ ಕೆರೆ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಮಹಾಪೋಷಕ ಸಿದ್ದೇಗೌಡ, ವಿಜಯ ಕರ್ನಾಟಕದ ಹಿರಿಯ ವರದಿಗಾರ ಆರ್. ಮಂಜುನಾಥ್, ನಿಸರ್ಗ ಪ್ರಸ್ಥಾನದ ಅಧ್ಯಕ್ಷ ಚಂದ್ರಶೇಖರ ಬಾಳೆ, ಗ್ಲೋಬಲ್ ಟೆಕ್ನಾಲಜಿಯ ಪ್ರೊ. ವೈ. ಲಿಂಗರಾಜು, ಪರಿಸರವಾದಿ ಶಿವಮಲ್ಲು, ಟ್ರಸ್ಟ್ ಅಧ್ಯಕ್ಷೆ ಶೋಭಾಗೌಡ ಹಾಗೂ ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಕಮಲ ಬಾಳೆ ಹಾಜರಿದ್ದರು.

ಹೆಸರಘಟ್ಟ ಜಲಾಶಯದಲ್ಲಿ 7 ಅಡಿ ನೀರು

ನಂದಿ ಬೆಟ್ಟದಿಂದ ತಾಯಿ ಅರ್ಕಾವತಿ ಹರಿಯಲು ಇನ್ನೂ ಅನುವು ಮಾಡಿಕೊಟ್ಟಿಲ್ಲ. ನದಿ ಪುನಶ್ಚೇತನದ ಮಾತು, ಪಾದಯಾತ್ರೆ ಮಾತ್ರ ಆಗಿದೆ. ಒತ್ತುವರಿ ತೆರವಿಗೆ ಒಂದಿಷ್ಟೂ ಮನೋನಿರ್ಧಾರವಾಗಿದೆ. ಅಷ್ಟರಲ್ಲೇ, ವರುಣ ಕೃಪೆ ತೋರಿದ್ದಾನೆ. 10 ವರ್ಷಗಳ ನಂತರ ಹೆಸರಘಟ್ಟ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿದ್ದಾನೆ. ನೀರೆಲ್ಲ ಹೆಸರಘಟ್ಟ ಸುತ್ತಮುತ್ತಲಿಂದ ಬಂದದ್ದು. ನಂದಿಯಲ್ಲಿನ ಮಳೆ ಕಾಲುವೆ ಮೂಲಕ ನೇರವಾಗಿ ಹರಿದಿದ್ದರೆ ಹೆಸರಘಟ್ಟ ಇನ್ನೆಷ್ಟು ನೀರು ತುಂಬಿಕೊಳ್ಳುತ್ತಿತ್ತು? ಅಂದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲೇ ಹೆಸರಘಟ್ಟಕ್ಕೆ ನೀರು ಹರಿಸಬಹುದೆಂಬುದು ಸಾಬೀತಾಗಿದೆ ಅಲ್ಲವೆ? ಇನ್ನೇಕೆ ತಡ? ಕಾರ್ಯಾರಂಭವಾಗಲಿ....
ಬೆಂಗಳೂರಿಗೆ ಪ್ರಥಮ ಬಾರಿಗೆ ಸಂಸ್ಕರಿತ ನೀರು ಪೂರೈಸಿದ ಹೆಸರಘಟ್ಟ ಜಲಾಶಯ ಹತ್ತು ವರ್ಷಗಳ ನಂತರ 7 ಅಡಿ ನೀರಿನ ಸೌಭಾಗ್ಯ ಕಂಡಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯೇ ಇದಕ್ಕೆ ಪ್ರಮುಖ ಆಸರೆಯಾಗಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ.

ಹೆಸರಘಟ್ಟಕ್ಕೆ ನೀರು ಬರಬೇಕೆಂದರೆ ಬ್ಯಾತ ಹಾಗೂ ಕಾಕೋಳು ಕೆರೆಗಳು ಕೋಡಿ ಆಗಬೇಕು. ಇದರಲ್ಲಿ ಬ್ಯಾತ ಕೆರೆ ಕೋಡಿ ಹರಿಯುತ್ತಿದ್ದು, ಹೆಚ್ಚಿನ ನೀರು ಈ ಮೂಲಕವೇ ಹೆಸರಘಟ್ಟಕ್ಕೆ ಹರಿಯುತ್ತಿದೆ. 20 ದಿನಗಳ ಹಿಂದಷ್ಟೇ ಗಾಲ್ಫ್ ಮೈದಾನದಂತಾಗಿದ್ದ ಹೆಸರಘಟ್ಟ, ಇಂದು ಹತ್ತು ವರ್ಷಗಳ ಹಿಂದಿನ ವೈಭವಕ್ಕೆ ಮರಳಿದೆ. ಜಲಾಶಯದ ಏರಿಯಿಂದ ನೋಡಿದ ದೂರದಷ್ಟೂ ನೀರು ಕಾಣುತ್ತಿದೆ. 1998ರಲ್ಲಿ 8 ಅಡಿ ನೀರು ಬಂದಿತ್ತು. ಅದಾದ ಮೇಲೆ 3-4 ಅಡಿಯಷ್ಟು ನೀರಿನ ಸಂಗ್ರಹ ಮಾತ್ರ ಇಲ್ಲಿ ದಾಖಲಾಗುತ್ತಿತ್ತು.
ಹೆಸರಘಟ್ಟದಲ್ಲಿರುವ ನೀರಿನ ಮಾಪನದಲ್ಲಿ 49 ಅಡಿ ಎಂದು ಸೂಚಿಸುತ್ತಿದೆ. ಆದರೆ, ಗಣನೆಗೆ ತೆಗೆದುಕೊಳ್ಳುವುದು ೪೨ ಅಡಿ ಯಿಂದ. ಉಳಿದದ್ದು ಹೂಳು ತುಂಬಿದೆ. ಹೆಸರಘಟ್ಟ ಜಲಾಶಯದಲ್ಲಿ ಹೂಳು ಏಕೆ ತೆಗೆಯುತ್ತೀರಿ? ನೀರು ಬರೋಲ್ಲ ಎಂದು ಕೊಂಕು ನುಡಿದಿದ್ದವರಿಗೆ ವರುಣ ಸೂಕ್ತ ಉತ್ತರ ನೀಡಿದ್ದಾನೆ. ಅದಕ್ಕೇ ದಿನವೂ ನೂರಾರು ಜನರು ಹೆಸರಘಟ್ಟಕ್ಕೆ ಬಂದು ನೀರಿನ ಸಂಗ್ರಹದ ಸೊಬಗು ಸವಿಯುತ್ತಿದ್ದಾರೆ.
ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ಈ ವರ್ಷ ಹೆಚ್ಚಿನ ನೀರು ಹರಿದುಬರುತ್ತಿದೆ. ಹಿಂದೆ ಕೇವಲ ಕಲ್ಮಶಯುಕ್ತ ನೀರು ಮಾತ್ರ ತಿಪ್ಪಗೊಂಡನಹಳ್ಳಿ ಸೇರುತ್ತಿತ್ತು. ಈ ಬಾರಿ ಸ್ವಚ್ಛ ಮಳೆ ನೀರು ಹರಿದುಬರುತ್ತಿರುವುದು ಜಲಮಂಡಳಿ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಐದಾರು ವರ್ಷಗಳಲ್ಲಿ ಇಷ್ಟು ನೀರಿನ ಹರಿವು ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅರ್ಕಾವತಿ ನದಿ ಹರಿದರೆ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ತುಂಬುತ್ತವೆ. ನಂದಿಬೆಟ್ಟದಿಂದ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಒತ್ತುವರಿ ತೆರವುಗೊಳಿಸಿ, ನದಿ ಪುನಶ್ಚೇತನವಾದರೆ ಹೆಸರಘಟ್ಟಕ್ಕೆ ನೀರು ತುಂಬುತ್ತದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದರು. ಸರಕಾರ ಪುನಶ್ಚೇತನಕ್ಕೆ ಸಮಿತಿ ರಚಿಸುವ ಭರವಸೆಯನ್ನೂ ನೀಡಿದೆ. ಈ ಪುನಶ್ಚೇತನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದರೆ ಇನ್ನೆಷ್ಟು ನೀರು ಬಂದಿರುತ್ತಿತ್ತು? ಈ ಬಗ್ಗೆ ಆಲೋಚಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.

Badge

Loading…
 

© 2009   Created by KOPPAL on Ning.   Create Your Own Social Network

Badges  |  Report an Issue  |  Privacy  |  Terms of Service